ನಂತರ ಅಮೃತಕಲಶವನ್ನು ನಾಗಗಳಿಗೆ ಕೊಟ್ಟು ತನ್ನ ತಾಯಿಯನ್ನು ದಾಸ್ಯದಿಂದ ವಿಮುಕ್ತಿಗೊಳಿಸಿದನು. ಆದರೆ ಸರ್ಪಗಳು ಸ್ನಾನ ಮಾಡಿಕೊಂಡು ಅಮೃತವನ್ನು ಸ್ವೀಕರಿಸಲು ಬರುವ ಹೊತ್ತಿಗೆ ಇಂದ್ರ ಆ ಕೊಡವನ್ನು ಅಪಹರಿಸಿದ್ದನು. ಸರ್ಪಗಳು ಅಮೃತವು ಸೋರಿ ದರ್ಭೆಯ ಮೇಲೆ ಬಿದ್ದಿರಬಹುದೆಂದು ಆ ದರ್ಭೆಯನ್ನು ನೆಕ್ಕಿದ್ದರಿಂದ ಅವುಗಳಿಗೆ ‘ಸೀಳುನಾಲಿಗೆ’ ಬಂದಿತೆಂದು ಉಲ್ಲೇಖಗಳಿವೆ.
Thursday, 3 July 2014
ಕದ್ರು-ಸರ್ಪ ವಿನುತೆ-ಗರುಡ.....
Tuesday, 1 July 2014
ಕಚ-ದೇವಯಾನಿ
ದೇವಗುರು ಬೃಹಸ್ಪತಿಯ ಮಗ ಕಚ. ದಾನವ ಗುರು ಶುಕ್ರಾಚಾರ್ಯ ಮಗಳು ದೇವಯಾನಿ. ದೇವ-ದಾನವರ ಯುದ್ಧದಲ್ಲಿ ದಾನವರು ಸತ್ತಾಗ ಬಳಿ ಸಂಜೀವಿನಿ ವಿದ್ಯೆಯಿದ್ದ ಕಾರಣ ಅದರ ಸಹಾಯದಿಂದ ಸತ್ತ ದಾನವರನ್ನು ಬದುಕಿಸುತ್ತಿದ್ದರು. ದೇವಗುರುವಿಗೆ ಈ ವಿದ್ಯೆ ತಿಳಿಯದ ಕಾರಣ ಅವರು ಒಂದು ತಂತ್ರ ಹೂಡುತ್ತಾರೆ. ಅದರಂತೆ ತನ್ನ ಮಗ ಕಚನಿಗೆ, " ನೀನು ಶುಕ್ರಾಚಾರ್ಯ ಬಳಿಗೆ ಹೋಗು. ದೇವಯಾನಿ ಮತ್ತು ಶುಕ್ರಾಚಾಯರನ್ನು ಪ್ರಸನ್ನಗೊಳಿಸಿ ಅವರೊಂದಿಗಿದ್ದು ಸಂಜೀವಿನಿ ವಿದ್ಯೆಯನ್ನು ಕಲಿತು ಬಾ" ಎಂದರು. ಅಷ್ಟೇ ಅಲ್ಲದೆ ಮೃತಸಂಜೀವಿನಿ ವಿದ್ಯೆಯನ್ನು ಕಲಿತು ಬಂದರೆ ತಮ್ಮೊಂದಿಗೆ ಆತನಿಗೂ ಸಹ ಹವಿರ್ಭಾಗದಲ್ಲಿ ಪಾಲು ಸಿಕ್ಕುತ್ತದೆ ಎಂದು ಆಶ್ವಾಸನೆ ನೀಡಿದರು.
ಕಚನ ಶಾಪದಂತೆ ದೇವಯಾನಿ ಬ್ರಾಹ್ಮಣನನ್ನು ಬಿಟ್ಟು ಕ್ಷತ್ರಿಯನಾದ ಯಯಾತಿಯನ್ನು ಮದುವೆಯಾಗಬೇಕಾಯಿತು. ಮೃತಸಂಜೀವಿನಿಯಿಂದ ಕಚನಿಗೆ ಏನೂ ಪ್ರಯೋಜನವಾಗದಿದ್ದರೂ ಆದಿ ಪವದಲ್ಲಿ ಅವನು ಈ ವಿದ್ಯೆಯನ್ನು ದೇವತೆಗಳಿಗೆ ಕಲಿಸಿಕೊಟ್ಟನು.
ಅಷ್ಟಾವಕ್ರ....
ಏಕಪಾದ ಮತ್ತು ಸುಜಾತೆಯರ ಮಗನೇ ಅಷ್ಟಾವಕ್ರ. ದೇಹದ ಎಂಟು ಅಂಗಗಳಲ್ಲಿ ವಿಕಲತೆಯನ್ನು ಹೊತ್ತುಕೊಂಡು ಹುಟ್ಟಿದ್ದರಿಂದ ಅಷ್ಟಾವಕ್ರನೆಂದು ಪ್ರಖ್ಯಾತನಾದ. ಏಕಪಾದರಿಗೆ ಖದೋರ ಎಂಬ ಹೆಸರು ಇದ್ದು ಅವರು ಸದಾ ವಿದ್ಯಾರ್ಥಿಗಳನ್ನು ವೇದಪಾಠ ಕಲಿಯುವಂತೆ ಒತ್ತಾಯಿಸುತ್ತಿದ್ದುದು ತಾಯಿಯ ಗರ್ಭದಲ್ಲಿದ್ದ ಅಷ್ಟಾವಕ್ರನಿಗೆ ಸರಿಬರದೆ ಅಪ್ಪನನ್ನು ಅಪೇಕ್ಷಿಸುತ್ತದೆ. ಇದರಿಂದ ಕೆರಳಿದ ಅಪ್ಪ, " ನೀನು ವಕ್ರವಾಗಿ ಮಾತಾಡಿದ್ದೀಯೆ ಆದ್ದರಿಂದ ಅಷ್ಟಾವಕ್ರನಾಗಿ ಹುಟ್ಟು" ಎಂದು ಶಾಪವಿತ್ತ. ನಂತರ ಮಗನನ್ನು ಸಾಕಲು ಹೆಣಗಬೇಕೆಂದು ಏಕಪಾದನು ಜನಕನ ಆಸ್ಥಾನಕ್ಕೆ ಹೋಗಿ ಅಲ್ಲಿ ವಾದದಲ್ಲಿ ಸೋತು ನೀರಿನಲ್ಲಿ ಮುಳುಗಿ ಸತ್ತ. ಮುಂದೆ ಉದ್ದಾಲಕರಲ್ಲಿ ವಿದ್ಯಾಭ್ಯಾಸ ಮುಗಿಸಿದ ಅಷ್ಟಾವಕ್ರನು ತನ್ನ ತಂದೆಗೆ ಬಂದ ಪಾಡನ್ನು ತಿಳಿದು ತನ್ನ ಸ್ನೇಹಿತ ಉದ್ದಾಲಕರ ಮಗನಾದ ಶ್ವೇತಕೇತುವಿನ ಜೊತೆಗೆ ಮಿಥಿಲೆಗೆ ಹೋದ. ಅಲ್ಲಿ ದೊಡ್ಡ ದೊಡ್ಡ ವಿದ್ವಾಂಸರನ್ನು ವಾದದಲ್ಲಿ ಸೋಲಿಸಿ, ನಂತರ ವರುಣನ ಪುತ್ರನಾದ ನಂದಿಯ ಜೊತೆ ವಾದಕ್ಕೆ ಇಳಿದು ಅವನನ್ನು ಸೋಲಿಸಿದ. ನಂದಿ ಸೋತ ಕಾರಣ ಅವನಿಗೆ ನೀರಿನಲ್ಲಿ ಮುಳುಗುವುದು ಅನಿವಾರ್ವಾಯಯಿತು.ಅವನು ನೀರಿನಲ್ಲಿ ಮುಳುಗಿದ ತಕ್ಷಣ ಅಷ್ಟಾವಕ್ರನ ತಂದೆಯಾದ ಏಕಪಾದನು ಬದುಕಿ ಬಂದ. ಹೀಗೆ ತನ್ನ ತಂದೆಯನ್ನು ಉಳಿಸಿಕೊಂಡು, ಸಮುದ್ದದೊಳಗಿದ್ದ ಬಂಧಿಗಳನ್ನು ಬಿಡಿಸಿಕೊಂಡು ಊರಿಗೆ ಹಿಂತಿರುಗಿದರು.
ಅಷ್ಟಾವಕ್ರನ ಬಗೆಗೆ ಬ್ರಹ್ಮವೈವರ್ಪುತಪುರಾಣ ಬೇರೆ ರೀತಿಯಲ್ಲಿ ಹೇಳುತ್ತದೆ. ಅಸಿತನ ಮಗ ದೇವಲ. ಅವನನ್ನು ಕಂಡು ರಂಭೆ ಮೋಹಿಸುತ್ತಾಳೆ. ಆದರೆ ಅವಳನ್ನು ಅವನು ತಿರಸ್ಕರಿಸಿದಾಗ ಅಷ್ಟಾವಕ್ರನಾಗುವಂತೆ ಶಾಪವಿತ್ತಳು. ಮುಂದೆ ಶ್ರೀಕೃಷ್ಣ-ರಾಧೆಯರು ಇವನ ಎದಯರಿಗೆ ನಿಂತಾಗ ಶ್ರೀಕೃಷ್ಣನ ಆಲಿಂಗನದಿಂದ ಅಷ್ಟಾವಕ್ರತ್ವ ಹೋಗಿ ದೇವಲನು ಸುಂದರ ಪುರುಷನಾದ ಎಂದು ತಿಳಿಸುತ್ತದೆ.
ಅಗ್ನಿಪುರಾಣದ ಪ್ರಕಾರ ಈ ಅಷ್ಟಾವಕ್ರನ ದೇಹದ ಕುರೂಪತೆಯನ್ನು ಕಂಡು ರಂಭೆ ಮೊದಲಾದ ಅಪ್ಸರೆಯರು ನಕ್ಕರಂತೆ. ಈ ತಪ್ಪಿಗಾಗಿ ಅವರು ಮುಂದೆ ಕೃಷ್ಣ ಪತ್ನಿಯಾರಾಗಿ ಕೃಷ್ಣನ ಮರಣಾನಂತರ ಬೇಡರ ಆಕ್ರಮಣಕ್ಕೆ ಒಳಗಾಗಬೇಕಾಯಿತು ಎನ್ನುತ್ತದೆ.
ಗ್ರಂಥ ಋಣ: ಮಹಾಭಾರತದ ಪಾತ್ರ ಸಂಗತಿಗಳು, ಅ.ರಾ. ಮಿತ್ರ.
ಅಷ್ಟಾವಕ್ರನ ಬಗೆಗೆ ಬ್ರಹ್ಮವೈವರ್ಪುತಪುರಾಣ ಬೇರೆ ರೀತಿಯಲ್ಲಿ ಹೇಳುತ್ತದೆ. ಅಸಿತನ ಮಗ ದೇವಲ. ಅವನನ್ನು ಕಂಡು ರಂಭೆ ಮೋಹಿಸುತ್ತಾಳೆ. ಆದರೆ ಅವಳನ್ನು ಅವನು ತಿರಸ್ಕರಿಸಿದಾಗ ಅಷ್ಟಾವಕ್ರನಾಗುವಂತೆ ಶಾಪವಿತ್ತಳು. ಮುಂದೆ ಶ್ರೀಕೃಷ್ಣ-ರಾಧೆಯರು ಇವನ ಎದಯರಿಗೆ ನಿಂತಾಗ ಶ್ರೀಕೃಷ್ಣನ ಆಲಿಂಗನದಿಂದ ಅಷ್ಟಾವಕ್ರತ್ವ ಹೋಗಿ ದೇವಲನು ಸುಂದರ ಪುರುಷನಾದ ಎಂದು ತಿಳಿಸುತ್ತದೆ.
ಅಗ್ನಿಪುರಾಣದ ಪ್ರಕಾರ ಈ ಅಷ್ಟಾವಕ್ರನ ದೇಹದ ಕುರೂಪತೆಯನ್ನು ಕಂಡು ರಂಭೆ ಮೊದಲಾದ ಅಪ್ಸರೆಯರು ನಕ್ಕರಂತೆ. ಈ ತಪ್ಪಿಗಾಗಿ ಅವರು ಮುಂದೆ ಕೃಷ್ಣ ಪತ್ನಿಯಾರಾಗಿ ಕೃಷ್ಣನ ಮರಣಾನಂತರ ಬೇಡರ ಆಕ್ರಮಣಕ್ಕೆ ಒಳಗಾಗಬೇಕಾಯಿತು ಎನ್ನುತ್ತದೆ.
ಗ್ರಂಥ ಋಣ: ಮಹಾಭಾರತದ ಪಾತ್ರ ಸಂಗತಿಗಳು, ಅ.ರಾ. ಮಿತ್ರ.
Subscribe to:
Comments (Atom)