Friday, 20 June 2014

ಮುನಿ ರೈಭ್ಯ.....

        ಉಪರಿಚರ ವಸುವಿನ ಮಹಾಯಜ್ಞದಲ್ಲಿ ಸದಸ್ಯರಾದವರಲ್ಲಿ ಈ ರೈಭ್ಯ ಮಹರ್ಷಿಯು ಒಬ್ಬರು. ಇವರು ಪ್ರಸಿದ್ದ ಋಷಿ ಅಂಗೀರಸರ ಮಗ. ಮುನಿ ಭರಧ್ವಜರ ಮಿತ್ರರಾಗಿದ್ದವರು. ಇವರಿಗೆ ಅವಾ೵ವಸು ಮತ್ತು ಪರಾವಸು ಎಂಬ ಮಕ್ಕಳಿದ್ದರು. ರೈಭ್ಯನು ಬೃಹಸ್ಪತಿಯ ಬಳಿಗೇ ಹೋಗಿ ಮೋಕ್ಷವು ಕರ್ಮದಿಂದ ಸಿದ್ಧಿಸುತ್ತದೆಯೋ ಜ್ಞಾನದಿಂದ ಸಿದ್ಧಿಸುತ್ತದೆಯೋ ಎಂಬ ಬಗೆಗೆ ಆರೋಗ್ಯಕರವಾದ ಚರ್ಚೆ ನಡೆಸಿದ್ದನ್ನು ನೋಡಿದರೆ ಆತನ ಜ್ಞಾನದ ಮಟ್ಟ ಎಷ್ಟೆಂಬುದು ತಿಳಿಯುತ್ತದೆ.
     
             ಭರಧ್ವಜ ಮುನಿಯ ಮಗನಾದ ಯವಕ್ರೀತ ಮತ್ತು ರೈಭ್ಯನ ಮಕ್ಕಳು ಒಟ್ಟಿಗೆ ರೈಭ್ಯರ ಬಳಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಅರ್ವಾವಸು ಮತ್ತು ಪರಾವಸು ಮಹಾಜ್ಞಾನಿಗಳಾಗಿದ್ದರು. ಆದರೆ ಇವರನ್ನು ಕಂಡರೆ ಯವಕ್ರೀತನಿಗೆ ಅಗಾದ ಅಸೂಹೆ. ಅಲ್ಲದೆ ವ್ಯಾಸಂಗ ಕಾಲದಲ್ಲಿ ತನ್ನ ಸಹಪಾಠಿಯಾಗಿದ್ದ ಪರಾವಸುವಿನ ಪತ್ನಿ ಕೃಷ್ಣೆಯ ಮೇಲೆ ಕಣ್ಣು ಹಾಕಿದ. ಈತನ ಬಲತ್ಕಾರದ ಪ್ರಯತ್ನವನ್ನು ತನ್ನ ಮಾವನಾದ ರೈಭ್ಯನಲ್ಲಿ ತಿಳಿಸಿದಳು. ಆಗ ರೈಭ್ಯನು ಒಂದು ಹೋಮವನ್ನು ಮಾಡಿ ಒಬ್ಬಳು ಸುರಾಸುಂದರಾಂಗಿಯನ್ನು ಮತ್ತು ಒಬ್ಬ ಘೋರ ರಾಕ್ಷಸಿಯನ್ನು ಸೃಷ್ಟಿಸಿದ. ಯವಕ್ರೀತನ ಕೈಯಲ್ಲಿ ಕಮಂಡಲವಿರುವತನಕ ಏನೂ ಮಾಡುವಂತಿಲ್ಲವಾದುದರಿಂದ ಸುಂದರಾಂಗಿಯನ್ನು ಕಳಿಸಿದಾಗ ಅವಳು ತನ್ನ ಮೈಮಾಟದಿಂದ ಅವನ ಕಣ್ಣು ತಪ್ಪಿಸಿ ಕಮಂಡಲವನ್ನು ಅಪಹರಿಸಿದಳು. ನಂತರ ರಾಕ್ಷಸಿಯು ಬಂದು ಯವಕ್ರೀತನನ್ನು ಸಂಹರಿಸಿದಳು. ಈ ಸುದ್ದಿಯನ್ನು ತಿಳಿದ ಭರಧ್ವಜರು ತನ್ನ ಗೆಳೆಯ ರೈಭ್ಯನಿಗೆ, " ನನ್ನ ಮಗನನ್ನು ಕೊಂದಿದ್ದೀಯೇ. ಈ ಪಾಪ ಕಾರ್ಯದ ಫಲವಾಗಿ ನಿನ್ನ ಮಗನಿಂದಲೇ ನಿನಗೆ ಸಾವು ಬರಲಿ" ಎಂದು ಶಾಪ ಕೊಟ್ಟರು.

              ನಂತರ ರೈಭ್ಯ ಮಗ ಪರಾವಸು ಒಮ್ಮೆ ಬೃಹದ್ಯುಮ್ನನೆಂಬ ರಾಜನ ಯಜ್ಞಕ್ಕೆ ಆಹ್ವಾನಿತನಾಗಿ ಹೊರಟಿದ್ದ. ಆಗ ಇನ್ನು ಬೆಳಗಿನ ಜಾವ. ಕತ್ತಲೆಯಲ್ಲಿ ಎದುರಿಗೆ ಯಾವುದೋ ಪ್ರಾಣಿ ತನ್ನ ಮೇಲೆ ಆಕ್ರಮಣ ಮಾಡುತ್ತಿದೆ ಎಂದು ಭಾಸವಾಗಿ ಕತ್ತಲಲ್ಲಿ ಅದನ್ನು ಕೊಂದುಹಾಕಿದ. ಆದರೆ ಆನಂತರ ನೋಡಿದಾಗ ಸತ್ತದ್ದು ಪ್ರಾಣಿಯಲ್ಲ ತನ್ನ ತಂದೆ ರೈಭ್ಯ ಮುನಿಯೇ ಎಂದು ಆತನಿಗೆ ತಿಳಿಯಿತು. ತದನಂತರ ಅರ್ವಾವಸು ಆಗಿದ್ದ ಪ್ರಾಮಾದವನ್ನು ತಪ್ಪಿಸುವ ಸಂಕಲ್ಪದಿಂದ ತುಂಬ ಶದರದ್ದೆಯಿಂದ ೊಂದು ಹೋಮ ಮಾಡಿದ. ದೇವತೆಗಳು ಪ್ರಸನ್ನರಾದರು. ಅವರು ವರವನ್ನು ಕೇಳು ಎಂದಾಗ ತನ್ನ ತಂದೆ ರೈಭ್ಯ ಬದುಕಿ ಬರುವಂತೆ ವರವನ್ನು ಕೋರಿದ. ಪ್ರಸನ್ನರಾಗಿದ್ದ ದೇವತೆಗಳು ಅನಾ೵ವಸುವಿಗೆ ಆತ ಕೇಳಿದ ವರವನ್ನು ಕೊಟ್ಟರು. ಹೀಗೆ ಅರ್ವಾವಸುವಿನಿಂದಾಗಿ ರೈಭ್ಯ ಬದುಕಿ ಬಂದ.

ಕೃಪೆ: ಅ.ರಾ. ಮಿತ್ರರ ' ಮಹಾಭಾರತದ ಪಾತ್ರ-ಸಂಗತಿಗಳು' ಸಂಪುಟ-2
         


No comments:

Post a Comment